ಲೇಖನ :- ಹೇಗೇ ಅರ್ಚಿಸಲಿ,ಹೇಗೆ ಮೆಚ್ಚಿಸಲಿ**ಅರ್ಥಾನುಸಂಧಾನ :-
ಹೇಗೇ ಅರ್ಚಿಸಲಿ,ಹೇಗೆ ಮೆಚ್ಚಿಸಲಿ* ದಾಸವ್ಯಾಸ ಸಾಹಿತ್ಯ ಅಜ್ಞಾನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಟಿಗೆಯಾಗಿದೆ. ಎಲ್ಲ ಮಹನೀಯರ ಸಾಹಿತ್ಯವನ್ನು ಅವಲೋಕಿಸಿದಾಗ ವೇದ ಉಪನೀಷತ ಭಾಗವತಾದಿ ಗ್ರಂಥಗಳ ಸಾರವನ್ನು ; ನಮ್ಮಂತಹ ಪಾಮರಿಗೆ ತಿಳಿಯಲು ಕನ್ನಡದಲ್ಲಿ ಕೀರ್ತನೆಗಳು, ಉಗಾಭೋಗ,ಸುಳಾದಿ ಹೀಗೆ ಹಲವು ಪ್ರಕಾರದಲ್ಲಿ ಬರೆದು ನಮಗೆ ಭಗವದ್ ಚಿಂತನೆಯಲ್ಲಿ ತೊಡಗಿಸಿಅಂತರ್ಯದ ಚಕ್ಷುವನ್ನು ತೆರೆಯುವಂತೆ ಮಾಡಿದ್ದಾರೆ. ಆದರೂ ನಾವು ಮೂಢರು ನಾವುಗಳು ಮಾಡುವ ಪ್ರತಿ ಕರ್ಮವನ್ನು ಅಹಂಕಾರದಿಂದ ಮಾಡುತ್ತೇಲೆ ಬಂದಿದ್ದೇವೆ. *"ಹೇಗೆ ಅರ್ಚಿಸಲಿ;* ಮೆಚ್ಚಸಲಿ"ಅನ್ನುವ ಕೃತಿಯಲ್ಲಿ ನಾವು ಭಗವಂತನ ಪೂಜೆ ಮಾಡುವ ಮೊದಲು , ದೇವಾದಿದೇವತೆಗಳ ಮೂಲಕ , ಪ್ರೇರ್ಯ, ಪ್ರೇರ್ಯಕನಾಗಿ ಸರ್ವೋತ್ತಮನಾದ ಭಗವಂತ ಅಣುತೃಣುವಿನಲ್ಲಿ ವ್ಯಾಪಿಸಿ, ತನ್ನ ತಾನೇ ಪೂಜೆಗೊಂಡರು, ಕಿಂಚಿತ್ತು ಗರ್ವ ಪಡದೇ , ಅನಂತಗುಣಗಣಗಳ ಮಹಿಮನಾದ ಚಿದಾನಂದಾತ್ಮಕನಾದ ಭಗವಂತನಲ್ಲಿ ವಿನಮ್ರದಿಂದ ಮೊರೆ ಹೋಗಿದ್ದಾರೆ. ಹರಿಕಥಾಮೃತಸಾರದ ಮೂರನೇ ಸಂಧಿಯಾದ "ವ್ಯಾಪ್ತಿಸಂಧಿ" ಯಲ್ಲಿ ಹದಿನಾಲ್ಕು ಲೋಕಗಳ ಒಡೆಯನಾದ ಅನಿತ್ಯ ಭಂಧುವಾದ ಭಗವಂತ ಸಮಸ್ತ ಸೃಷ್ಟ್ಯಾದಿಗಳಲ್ಲಿ ನಿಂತು ನಿತ್ಯ ಯಾವ ರೀತಿ ಪೂಜೆಗೊಂಬು ವದನ್ನು ಸುಂದರವಾಗಿ ವರ್ಣಿಸಿದ್ದಾರೆ. *ಪಲ್ಲವಿ* *ಹೇಗೆ ಅರ್ಚಿಸಲಿ ಮೆಚ್ಚಿಸಲಿ* *ನಿನ್ನನಾಗಶಯನ* *ನಾರದವಂದಿತನೆ ದೇವಾ*/ ಪ *ಅರ್ಥ: