ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ
ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ ಇನ್ನು ಮಳೆಗಾಲ ಪ್ರಾರಂಭ ಸೃಷ್ಟಿಯು ದಟ್ಟ ಹಸಿರಿನಿಂದ ಕಂಗೊಳಿಸುತ್ತ, ನವ ವಧುವಿನಂತೆ ಶೃಂಗಾರವಾಗಿ ಕಾಣುತ್ತಾ ನೋಡುಗರ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವ ಹಾಗೂ ರೈತ ಭಾಂದವರಿಗೆ ಮತ್ತು ಜನರ ಜೀವನಕ್ಕೆ ಸೆಲೆಯಾಗಿ ತಣಿಸುವ ಮಳೆಗಾಲಕ್ಕೆ ಸ್ವಾಗತ ಹೇಳುತ್ತಾ.... ಇಂದಿನ ಚೈತನ್ಯದ ಚಿಲುಮೆಯ ವಿಷಯ "ಇಳೆಗೆ ಕಳೆ ಮಳೆ ಬಾಳಿಗೆ ಉತ್ಸಾಹದ ಸೆಲೆ. ಮಳೆಗಾಲ ಎಂದರೆ ಸುಂದರ ಆಹ್ಲಾದಕರ ಮನಸ್ಸಿಗೆ ಕಣ್ಣಿಗೆ ಹಿತ ನೀಡುವ ರಮಣೀಯ ಕಾಲ. ಮಳೆಗಾಲದ ದಿನಗಳು ಭಾವನಾತ್ಮಕ, ರೋಮಾಂಚಕ ಯೋಚನಾ ಲಹರಿ ಬಿತ್ತುವ ಕಾಲ. ಕವಿಮನಸ್ಸುಗಳಿಗಂತೂ ಹೇಳಿ ಮಾಡಿಸಿದ ಕಾಲ ಬಾಹಿರಿಕ ಹಚ್ಚ ಹಸಿರಿನ ಸೃಷ್ಟಿ ಕುಣಿದರೆ, ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಸುಮಧುರವಾದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸುವ ಕಾಲ್, ಹಾಗೇ ಸುಪ್ತ ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ ಸವಿ ನೆನಪುಗಳನ್ನು ಸಹಾ ಈಚೆ ಬರುವ ಕಾಲ - ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿಯನ್ನು ಹೊಂದಿಕೊಂಡು, ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು ಈ ಮಳೆಗಾಲದ ದಿನಗಳು ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಕಟ್ಟಿಕೊಡುವ ಶಕ್ತಿಯುಳ್ಳ ಮಳೆಗಾಲದ ರಮ್ಯತೆ, ಗಮ್ಯತೆ ಅದೆಷ್ಟೋ ಸಂದರ್ಭಗಳಲ್ಲಿ ...