ಲೇಖನ :- ಬಂತು ಸಂಕ್ರಾಂತಿ ತಂತು ಉಲ್ಲಾಸದ ಕಾಂತಿ
ಲೇಖನ :-ಸಂಕ್ರಾಂತಿ ಬಂತು ನವ ಉಲ್ಲಾಸ ತಂತು ಸ್ನೇಹಿತರೇ , ಬಹಳ ಧೀರ್ಘವಾದ ಉಪಯುಕ್ತವಾದ ಬರಹ ! ನಿಧಾನವಾಗಿ ಓದಿ ಅರ್ಥಮಾಡಿಕೊಂಡು ಹಬ್ಬವನ್ನಾಚರಿಸಿ ! ಅದಕ್ಕೇ ಮೊದಲೇ ಬರೆದಿದ್ದೇನೆ !!! ನಾಳೆ ಶನಿವಾರ "ಭೋಗಿಹಬ್ಬ" ! ಧನುರ್ಮಾಸದ ಕೊನೆಯದಿನ , ಮತ್ತೆ ಭಾನುವಾರ ಮಕರಸಂಕ್ರಾಂತಿ ಹಬ್ಬ . ಮಕರಸಂಕ್ರಾಂತಿ ಹೊಸ ವರ್ಷದ ಮೊದಲ ವಿಶೇಷವಾದ ಹಬ್ಬ !!!! ಮೊದಲು ಭೋಗಿಹಬ್ಬದ ಬಗ್ಗೆ ತಿಳಿಯೋಣ --- ಭೋಗಿಹಬ್ಬದಂದು ದಾನ ಕೊಟ್ಟರೆ ಜೀವನದಲ್ಲಿ ಸದಾ ಸುಖದ ಅನುಭೋಗ ದೊರಕುವುದೆಂದೇ ಪ್ರತೀತಿ ಇದೆ ! ಸಾಮಾನ್ಯವಾಗಿ ಇಂದು ದಾನಕ್ಕೆ ಪ್ರಾಮುಖ್ಯತೆ ! ಧನುರ್ಮಾಸದಲ್ಲಿ ತಿಂಗಳು ಪೂರಾ ಪ್ರಾತಃಕಾಲದಲ್ಲೆದ್ದು ಶುದ್ಧರಾಗಿ ದೇವರಪೂಜೆಮಾಡಿ ವಿಷ್ಣುವಿಗೆ ಪ್ರಿಯವಾದ ಮುದ್ಗಾನ್ನ ಅಂದರೆ ಹುಗ್ಗಿಯನ್ನೇ ನೈವೇದ್ಯ ಮಾಡುತ್ತಿರುತ್ತೇವೆ ಇದು ನಾಳೆಗೆ ಮುಗಿಯುತ್ತದೆ - ಎಷ್ಟೋಜನರಿಗೆ ಅನಿವಾರ್ಯ ಕಾರಣಗಳಿಂದಾಗಿ ತಿಂಗಳಿಡೀ ಹುಗ್ಗಿ ನೈವೇದ್ಯ ಮಾಡಲಾಗಿರುವುದಿಲ್ಲ - ಅಂತಹವರೂ ಸೇರಿ ನಾಳೆ ಹುಗ್ಗಿಯ ಸಾಮಾನುಗಳನ್ನು ಅಂದರೆ - ಹೆಸರುಬೇಳೆ , ಅಕ್ಕಿ ,ಬೆಲ್ಲ ,ತುಪ್ಪ , ಕೊಬ್ಬರಿ + ತರಕಾರಿ ಕುಂಬಳಕಾಯಿಯನ್ನು ದಕ್ಷಿಣೆ ಸಮೇತ ತಾಂಬೂಲದೊಂದಿಗೆ ಶ್ರದ್ಧಾಭಕ್ತಿಯಿಂದ ಬ್ರಾಹ್ಮಣರಿಗೆ ದಾನ ಮಾಡಿದಲ್ಲಿ --- ಜೀವಿತ...