Posts

ಲೇಖನ :- ಬಂತು ಸಂಕ್ರಾಂತಿ ತಂತು ಉಲ್ಲಾಸದ ಕಾಂತಿ

Image
ಲೇಖನ :-ಸಂಕ್ರಾಂತಿ ಬಂತು ನವ ಉಲ್ಲಾಸ ತಂತು ಸ್ನೇಹಿತರೇ , ಬಹಳ ಧೀರ್ಘವಾದ ಉಪಯುಕ್ತವಾದ ಬರಹ ! ನಿಧಾನವಾಗಿ ಓದಿ ಅರ್ಥಮಾಡಿಕೊಂಡು ಹಬ್ಬವನ್ನಾಚರಿಸಿ ! ಅದಕ್ಕೇ ಮೊದಲೇ ಬರೆದಿದ್ದೇನೆ !!! ನಾಳೆ ಶನಿವಾರ "ಭೋಗಿಹಬ್ಬ" ! ಧನುರ್ಮಾಸದ ಕೊನೆಯದಿನ , ಮತ್ತೆ ಭಾನುವಾರ ಮಕರಸಂಕ್ರಾಂತಿ ಹಬ್ಬ .                 ಮಕರಸಂಕ್ರಾಂತಿ ಹೊಸ ವರ್ಷದ ಮೊದಲ ವಿಶೇಷವಾದ ಹಬ್ಬ !!!! ಮೊದಲು ಭೋಗಿಹಬ್ಬದ ಬಗ್ಗೆ ತಿಳಿಯೋಣ --- ಭೋಗಿಹಬ್ಬದಂದು ದಾನ ಕೊಟ್ಟರೆ ಜೀವನದಲ್ಲಿ ಸದಾ ಸುಖದ ಅನುಭೋಗ ದೊರಕುವುದೆಂದೇ ಪ್ರತೀತಿ ಇದೆ ! ಸಾಮಾನ್ಯವಾಗಿ ಇಂದು ದಾನಕ್ಕೆ ಪ್ರಾಮುಖ್ಯತೆ ! ಧನುರ್ಮಾಸದಲ್ಲಿ ತಿಂಗಳು ಪೂರಾ ಪ್ರಾತಃಕಾಲದಲ್ಲೆದ್ದು ಶುದ್ಧರಾಗಿ ದೇವರಪೂಜೆಮಾಡಿ ವಿಷ್ಣುವಿಗೆ ಪ್ರಿಯವಾದ ಮುದ್ಗಾನ್ನ ಅಂದರೆ ಹುಗ್ಗಿಯನ್ನೇ ನೈವೇದ್ಯ ಮಾಡುತ್ತಿರುತ್ತೇವೆ ಇದು ನಾಳೆಗೆ ಮುಗಿಯುತ್ತದೆ - ಎಷ್ಟೋಜನರಿಗೆ ಅನಿವಾರ್ಯ ಕಾರಣಗಳಿಂದಾಗಿ ತಿಂಗಳಿಡೀ ಹುಗ್ಗಿ ನೈವೇದ್ಯ ಮಾಡಲಾಗಿರುವುದಿಲ್ಲ - ಅಂತಹವರೂ ಸೇರಿ ನಾಳೆ ಹುಗ್ಗಿಯ ಸಾಮಾನುಗಳನ್ನು ಅಂದರೆ - ಹೆಸರುಬೇಳೆ , ಅಕ್ಕಿ ,ಬೆಲ್ಲ ,ತುಪ್ಪ ,  ಕೊಬ್ಬರಿ + ತರಕಾರಿ  ಕುಂಬಳಕಾಯಿಯನ್ನು ದಕ್ಷಿಣೆ ಸಮೇತ ತಾಂಬೂಲದೊಂದಿಗೆ ಶ್ರದ್ಧಾಭಕ್ತಿಯಿಂದ  ಬ್ರಾಹ್ಮಣರಿಗೆ ದಾನ ಮಾಡಿದಲ್ಲಿ --- ಜೀವಿತ...

ಮುಂಡಿಗೆ ಚಿಂತನೆ

ಮುಂಡಿಗೆ ಚಿಂತನೆ (ಶ್ರೀ ರಾಮದಾಸರ ಕೃತಿ) "ಮುಂಡಿಗೆ"ಎಂದರೆ ಗೂಡಾರ್ಥ ಹೊಂದಿರುವ ಸಾಹಿತ್ಯ. ರಾಮದಾಸರ ಮುಂಡಿಗೆ ಚಿಂತನೆ ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು 8 ಮೆತ್ತಗೆ ಸುತ್ತಿಕೊಂಡು ಮಲಗಿದಳು ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು __________////////___________//////// _________ ಅರ್ಥಾನುಸಂಧಾನ :- ಮೇಲಿನ ಮುಂಡಿಗೆಗೆ ಮತಿಗೆ ತಿಳಿದಿತ್ತು ಅರ್ಥೈಸಲು ಪ್ರಯತ್ನ ಮಾಡಿದ್ದೇನೆ.ತಪ್ಪಿದಲ್ಲಿ ಕ್ಷಮಿಸಿ ಈ ಮುಂಡಿಗೆಯಲ್ಲಿ ಮನಸ್ಸು ಮತ್ತು ಮಾಯೆ ಬಗ್ಗೆ ಹೇಳಿದ್ದಾರೆ. ಮಾಯೆ ಎಂಬ ಭಾವನೆ ಉಂಟಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ಪ್ರತಿ ನುಡಿಯಲ್ಲಿ ಹೇಳಿದ್ದಾರೆ. "ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ" ಈ ಪಲ್ಲವಿಯಲ್ಲಿ ಮಾಯೆ ಮನಸ್ಸಿನ ಜೊತೆ ಆಡುವ ಆಟದ ಬಗ್ಗೆ ಹೇಳಿದ್ದಾರೆ. ಮನಸ್ಸು ಕಾಣದ. ಮುಟ್ಟದ ವಸ್ತು...

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಪುಸ್ತಕ - ಮಸ್ತಕ :- ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"  ಲೇಖಕರು :- ಮುರುಗೇಶ ಸಂಗಮ  (೯೪೪೯೪೩೭೬೦೪) ಬೆಲೆ :- ೧೧೦  ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರಪಂಚದ ಮತ್ತು ನಮ್ಮ ಸುತ್ತಮುತ್ತಲಿನ ವಿಷಯ ತಿಳಿಯುತ್ತದೆ. ಕಣ್ಣುಗಳು  ಚಿಕ್ಕದಾಗಿದ್ದರೂ ಇಡೀ  ಲೋಕವನ್ನೆಲ್ಲ ನೋಡುವ ಹಾಗೂ ಅನುಭವ ಪಡೆಯುತ್ತದೆ. ಹಾಗೇ  "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ" ಪುಸ್ತಕ ಓದಿದರೆ  ಬಸವಣ್ಣನವರ ಹುಟ್ಟು ಹಾಗೂ ಅವರ ಜೀವನವನ್ನು ಲಿಖಿತˌ ಮತ್ತು ಮೌಲಿಕ ಮಾಹಿತಿಯೊಂದಿಗೆ ಚಿಕ್ಕದಾಗಿ ಚೊಕ್ಕವಾಗಿ ಆಧಾರಸಹಿತವಾಗಿ ನೀಡಿರುವುದು ಈ ಗ್ರಂಥದ ವಿಶೇಷವಾಗಿದೆ . ಬಸವನಬಾಗೇವಾಡಿಯಲ್ಲಿರುವ ಬಸವಣ್ಣನವರ ಜನ್ಮಸ್ಥಳದಲ್ಲಿ ಬಸವ ಜನ್ಮಸ್ಮಾರಕ ನಿರ್ಮಾಣದ ಪ್ರಯತ್ನ ಮತ್ತು ಹೋರಾಟದ ಮಜಲುಗಳ ಬಗ್ಗೆ ವಿಸ್ತೃತ ವಿವರಗಳನ್ನೊಳಗೊಂಡ ಹೊತ್ತಿಗೆ ಓದುಗರ ಮನಮುಟ್ಟುತ್ತದೆ. ಪಟ್ಟಣದ ಇತಿಹಾಸ ಹಾಗೂ ಬಸವೇಶ್ವರರ ಜೀವನ ಚರಿತ್ರೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಲೇಖಕರು. ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಪರಿಶ್ರಮಿಸಿದವರಲ್ಲಿ ಅಗ್ರಗಣ್ಯರಾಗಿರುವ ದಿ.ರಾವಸಾಹೇಬ ಮಲ್ಲಪ್ಪ ಸಿಂಹಾಸನ ಅವರ ಪರಿಶ್ರಮ ಮೆಚ್ಚುವಂತದ್ದು. ಅವರ ಅನುಪಮ ಸೇವೆಯನ್ನು ಮನದುಂಬಿ ಸ್ಮರಿಸಿದ್ದಾರೆ ಲೇಖಕರು. ಅಂತಹ ಮೇರು ವ್ಯಕ್ತಿಗಳಾದ ಸಿಂಹಾ...