Posts

ಗೌರಿ ಹುಣ್ಣಿಮೆ ಮತ್ತು ಸಕ್ಕರೆಬೊಂಬೆ

Image
ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ ಕೈಯಲ್ಲಿಟ್ಟಾಗ ಅದರಂದಕೆ ಮಾರು ಹೋಗಿದ್ದು, ಅದನ್ನು ಸವಿದು ಸಂತಸ ಪಟ್ಟ ನೆನಪುಗಳು ಮರುಕಳಿಸುತ್ತವೆ. ಈಗ ಇದೆಲ್ಲಾ ಇತಿಹಾಸ ಎನ್ನಬಹುದೇನೋ! ಉತ್ತರ ಕರ‍್ನಾಟಕದಲ್ಲಿ ಶೀಗಿ ಮತ್ತು ಗೌರಿ ಹುಣ್ಣಿಮೆ ದಿನ ಗೌರಿಯ ಹೆಸರಿನಲ್ಲಿ ಪಾರ‍್ವತಿಯನ್ನು ಆರಾದಿಸಿದರೆ, ಸಕ್ಕರೆ ಅಚ್ಚುಗಳಿಗೆ ಪೂಜೆಯಲ್ಲಿ ಆದ್ಯತೆ. ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳನ್ನು ಆರತಿಯ ಜೊತೆಗೆ ತಟ್ಟೆಯಲ್ಲಿಟ್ಟ ಪುಟ್ಟ ಪುಟ್ಟ ಹುಡುಗಿಯರು, ಮನೆಮನೆಗೆ ತೆರಳಿ ಗೌರಿಗೆ ಆರತಿ ಮಾಡಿ ಬರುತ್ತಾರೆ. ಅಲ್ಲದೇ ಬಣ್ಣಬಣ್ಣದ ಕೋಲುಗಳೊಂದಿಗೆ ಕೋಲಾಟದ ಹೆಜ್ಜೆ ಹಾಕುತ್ತ ಕೋಲಾಟದ ಹಾಡಾದ ಗೌರಿ ಗೌರಿ ಗಾಣಾ ಗೌರಿ ಮ್ಯಾಣಾ ಗೌರಿ ಕುಂಕುಮ ಗೌರಿ ಅರಿಶಿಣ ಗೌರಿ ಅವರಿ ಅಂತ ಅಣ್ಣನ ಕೊಡ ತೊಗರಿ ಅಂತ ತಮ್ಮನ ಕೊಡ ಎಂದು ಹಾಡುತ್ತ ಆರತಿ ಬೆಳಗುವುದೇ ಒಂದು ಸಡಗರ. ಹಾಗೇ, ಒಬ್ಬ ಹುಡುಗನಿಗೆ ಹುಡುಗಿ ಗೊತ್ತು ಮಾಡಿದ್ದರೆ, ಮದುವೆಗೆ ಮೊದಲೇ ಗೌರಿ ಹುಣ್ಣಿಮೆ ಬಂದರೆ ಗಂಡಿನವರು ಮದುವೆ ಹೆಣ್ಣಿಗೆ ಸಕ್ಕರೆ ಗೊಂಬೆ, ಸೀರೆ, ದಂಡಿ ತಂದು ಹುಡುಗಿಗೆ ಆರತಿ ಮಾಡ್ತಾರೆ. ಆರತಿ ಮಾಡಲು ಓಣಿಯಲ್ಲಿನ ಮುತ್ತೈದೆಯರನು ಕರೆದ...

ತಿರುಪತಿ ತಿಮ್ಮಪ್ಪನ ಅತೀಂದ್ರಿಯ ಮಾಹಿತಿ

Image
ತಿರುಪತಿ ತಿಮ್ಮಪ್ಪನ ಅತೀಂದ್ರಿಯ ಮಾಹಿತಿ  ದಟ್ಟವಾದ ಅರಣ್ಯ, ಮುಗಿಲು ಮುಟ್ಟುವ ಸಪ್ತಗಿರಿಗಳು, ಬೆಳ್ಳಂಬೆಳಗ್ಗೆ ಕೇಳಿಬರುವ ‘ಕೌಸಲ್ಯಾ ಸುಪ್ರಜಾ ರಾಮ...’ ಸುಪ್ರಭಾತದ ನಾದ, ಮೈ ಕೊರೆಯುವ ಚಳಿ, ಅದರ ನಡುವೆ ಲಕ್ಷಾಂತರ ಭಕ್ತರ ಬಾಯಲ್ಲಿ ಹೊರಹೊಮ್ಮುವ ‘ಗೋವಿಂದ... ಗೋವಿಂದ...’ ಎಂಬ ನಾಮಸ್ಮರಣೆ. ಇದು ತಿರುಮಲ. ಇದು ಬರಿ ಒಂದು ಸ್ಥಳವಲ್ಲ, ನಂಬಿಕೆಯ ಪರಾಕಾಷ್ಠೆ. ಬನ್ನಿ, ಇಂದಿನ ಈ ಕಥಾ ರೂಪದ ಪಯಣದಲ್ಲಿ ನಾವು ಭೂಲೋಕದ ವೈಕುಂಠವೆಂದೇ ಕರೆಸಿಕೊಳ್ಳುವ ತಿರುಮಲದ ಗರ್ಭಗುಡಿಯೊಳಗೆ ಇಣುಕಿ, ಅಲ್ಲಿನ ರಹಸ್ಯಗಳನ್ನು ಅರಿಯೋಣ. ಒಮ್ಮೆ ಮಹರ್ಷಿ ಬೃಗುವು ದೇವತೆಗಳಲ್ಲಿ ಯಾರು ಶಾಂತಮೂರ್ತಿ ಎಂದು ಪರೀಕ್ಷಿಸಲು ಹೊರಟರು. ಬ್ರಹ್ಮ, ಶಿವನ ಬಳಿ ಹೋಗಿ ಅತೃಪ್ತರಾದ ಅವರು ಅಂತಿಮವಾಗಿ ವೈಕುಂಠಕ್ಕೆ ಹೋದರು. ಅಲ್ಲಿ ಶ್ರೀಮನ್ನಾರಾಯಣನು ಲಕ್ಷ್ಮಿಯೊಂದಿಗೆ ವಿಶ್ರಮಿಸುತ್ತಿದ್ದನು. ತನ್ನನ್ನು ಗಮನಿಸದಿದ್ದಕ್ಕೆ ಸಿಟ್ಟಿಗೆದ್ದ ಬೃಗು ಮಹರ್ಷಿ ನಾರಾಯಣನ ಎದೆಗೆ ಒದ್ದರು. ಆದರೆ ನಾರಾಯಣನು ಸಿಟ್ಟಾಗುವ ಬದಲು, ಮಹರ್ಷಿಯ ಪಾದವನ್ನು ಒತ್ತಿ ಅವರ ಕಾಲಿನಲ್ಲಿದ್ದ ‘ಅಹಂಕಾರದ ಕಣ್ಣನ್ನು’ ಕಿತ್ತರು. ಈ ಘಟನೆಯಿಂದ ಕೋಪಗೊಂಡ ಲಕ್ಷ್ಮೀದೇವಿ ವೈಕುಂಠವನ್ನು ಬಿಟ್ಟು ಭೂಲೋಕಕ್ಕೆ ಬಂದು ಕೊಲ್ಲಾಪುರದಲ್ಲಿ ನೆಲೆಸಿದಳು. ತನ್ನ ಪ್ರಿಯತಮೆಯನ್ನು ಹುಡುಕುತ್ತಾ ನಾರಾಯಣನು ಶ್ರೀನಿವಾಸನಾಗಿ ಭೂಮಿಗೆ ಬಂದು ಶೇಷಾಚಲ ಬೆಟ್ಟದಲ್ಲಿ ನೆಲೆಸಿದನು. ಅಲ್ಲಿ ಆತನು ಪದ್...

ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ

Image
ಲೇಖನ :- ಇಳೆಗೆ ಕಳೆ ಮಳೆ, ಬಾಳಿಗೆ ಉತ್ಸಾಹದ ಸೆಲೆ ಇನ್ನು ಮಳೆಗಾಲ ಪ್ರಾರಂಭ ಸೃಷ್ಟಿಯು ದಟ್ಟ ಹಸಿರಿನಿಂದ ಕಂಗೊಳಿಸುತ್ತ, ನವ ವಧುವಿನಂತೆ ಶೃಂಗಾರವಾಗಿ ಕಾಣುತ್ತಾ ನೋಡುಗರ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವ ಹಾಗೂ ರೈತ ಭಾಂದವರಿಗೆ ಮತ್ತು ಜನರ ಜೀವನಕ್ಕೆ ಸೆಲೆಯಾಗಿ ತಣಿಸುವ ಮಳೆಗಾಲಕ್ಕೆ ಸ್ವಾಗತ ಹೇಳುತ್ತಾ.... ಇಂದಿನ ಚೈತನ್ಯದ ಚಿಲುಮೆಯ ವಿಷಯ "ಇಳೆಗೆ ಕಳೆ ಮಳೆ ಬಾಳಿಗೆ ಉತ್ಸಾಹದ ಸೆಲೆ. ಮಳೆಗಾಲ ಎಂದರೆ ಸುಂದರ ಆಹ್ಲಾದಕರ ಮನಸ್ಸಿಗೆ ಕಣ್ಣಿಗೆ ಹಿತ ನೀಡುವ ರಮಣೀಯ ಕಾಲ. ಮಳೆಗಾಲದ ದಿನಗಳು ಭಾವನಾತ್ಮಕ, ರೋಮಾಂಚಕ ಯೋಚನಾ ಲಹರಿ ಬಿತ್ತುವ ಕಾಲ. ಕವಿಮನಸ್ಸುಗಳಿಗಂತೂ ಹೇಳಿ ಮಾಡಿಸಿದ ಕಾಲ ಬಾಹಿರಿಕ ಹಚ್ಚ ಹಸಿರಿನ ಸೃಷ್ಟಿ ಕುಣಿದರೆ, ಸುರಿವ ಮಳೆಯ ತಾಳದೊಂದಿಗೆ, ಮನೆಯೊಳಗೆ ಕುಳಿತು ಮಳೆಯನ್ನು ನೋಡುತ್ತಾ ಇದ್ದರೆ, ಸುಮಧುರವಾದ ಭಾವಗಳೆಲ್ಲ ಮನಸ್ಸನ್ನು ತುಂಬುತ್ತವೆ. ಆ ರೀತಿ ಮನದುಂಬುವ ಭಾವಗಳು ಸಂತೋಷದ ಅಲೆಗಳನ್ನೂ ಹೊಮ್ಮಿಸುವ ಕಾಲ್, ಹಾಗೇ ಸುಪ್ತ ಮನಸ್ಸಿನ ಮೂಲೆಯಲ್ಲಿ ಅಡಗಿ ಕುಳಿತ  ಸವಿ ನೆನಪುಗಳನ್ನು ಸಹಾ ಈಚೆ ಬರುವ ಕಾಲ - ಅಂತಹ ಭಾವನೆಗಳ ತರಂಗಗಳನ್ನು ಸ್ವೀಕರಿಸುವ ರೀತಿಯನ್ನು ಹೊಂದಿಕೊಂಡು, ನಮ್ಮ ಮನಸ್ಸಿನ ಮೇಲೆ ಗಾಢ ಅಚ್ಚೊತ್ತಬಲ್ಲದು ಈ ಮಳೆಗಾಲದ ದಿನಗಳು ಭಾವಜೀವಿಯ ಭಾವನೆಗಳಿಗೆ ಕಾವ್ಯಾತ್ಮಕ ರೆಕ್ಕೆಗಳನ್ನು ಕಟ್ಟಿಕೊಡುವ ಶಕ್ತಿಯುಳ್ಳ ಮಳೆಗಾಲದ ರಮ್ಯತೆ, ಗಮ್ಯತೆ ಅದೆಷ್ಟೋ ಸಂದರ್ಭಗಳಲ್ಲಿ ...

ಲೇಖನ :- ಚಿದಂಬರನಾಮ ಝೇಂಕರಿಸಿದ ಸಂತ ರಾಜಾರಾಮ

Image
       ಶ್ರೀ ಚಿದಂಬರ ಮಹಾಸ್ವಾಮಿಗಳು   ಶ್ರೀ ಚಿದಂಬರ ಭಕ್ತ  ಸಂತ ಶ್ರೀ                ರಾಜಾರಾಮ್   ಲೇಖನ :- ಚಿದಂಬರನಾಮ  ಝೇಂಕರಿಸಿದ ಸಂತ ರಾಜಾರಾಮ ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ. ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ ಎಂದು ಕೃಷ್ಣ ಹೇಳಿದ್ದಾನೆ. ದೇಶ ಕಾಲ ಭೇದ ತೋರದೆ ಬೇರೆಬೇರೆ ಪ್ರಾಂತಗಳಲ್ಲಿ ಬೇರೆ ಬೇರೆ ರೂಪಗಳಿಂದ ಅವತರಿಸಿ ಬಂದು ಶಿಷ್ಟ ರಕ್ಷಣೆ ದುಷ್ಟ  ಶಿಕ್ಷಣೆ ಭಗವಂತ ಮಾಡಿದ್ದಾನೆ. ಆದರಂತೆಯೇ ನಮ್ಮ ಕರ್ನಾಟಕದ ಸುಕ್ಷೇತ್ರ ಮುರಗೋಡ ಗ್ರಾಮದ ಭಕ್ತ ವಾತ್ಸಲನಾದ ಭಕ್ತರ ಅಭೀಷ್ಟವ ಈಡೇರಿಸುವ  ಭಕ್ತ...

ಅಂಕಣ ೦೧:- ದಾಸಮುಖಿ ಜೀವನಸುಖಿ

Image
ಅಂಕಣ ೦೧:- ದಾಸಮುಖಿ ಜೀವನಸುಖಿ ವಾರ :- ಗುರುವಾರ ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,*ಪಾರ್ವತಿ)* ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,*ಪಾರ್ವತಿ)* ಹಾಗೂ ಅವರ ಪಾತ್ರ ನಮ್ಮ ಜೀವನದಲ್ಲಿ ಎಷ್ಟು ಪ್ರಭಾವತೆಯಿಂದ ಕೂಡಿದೆ ಎಂಬುದರ ಬಗ್ಗೆ ಹರಿದಾಸರ ಕೃತಿಗಳಿಂದ ತಿಳಿದುಕೊಳ್ಳೋಣ ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಸಾಮಾನ್ಯರ ಮನಸ್ಸು ಆಕರ್ಷಿಸಿದ ಹರಿದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು. ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿನ ನ್ಯೂನತೆ ಮತ್ತು ಅಂಧಕಾರವನ್ನು ಹೋಗಲಾಡಿಸಿ, ಭಕ್ತಿಯ ಬೀಜ ಬಿತ್ತಿದ್ದಾರೆ ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ’. *ಲಕ್ಷ್ಮಿ ಚಿಂತನೆ* ಲಕ್ಷ್ಮಿ ದೇವಿ ವೇದಾಭಿಮಾನಿ ದೇವತೆ. ಸಿರಿ ಸಂಪತ್ತಿನ ಒಡತಿ, ಶ್ರೀನಿವಾಸನ ವೃಕ್ಷಸ್ಥಳವಾಸಿನಿ. ಅನಂತ ಗುಣಗಳಿಂದ ಶ್ರೇಷ್ಠಳು. *ಶ್ರೀ ವಾದಿರಾಜರು ರಚಿಸಿದ ಕೃತಿಯಲ್ಲಿ* *"ಕಾಯೇ ಶ್ರೀಕಾಮಲಾಲಾಯೆ /ಕಲ್ಲೂರನೀಲಯೇ /ಪ ನೊಂದಿರುವೆ ಸಂಸಾರದಿ ಸತಿಸುತರ ಸಂದಣಿ ಬೆಂದೆನೋ ಮಾನದಿ................ ಶ್ರೀ ಹಯವದನ ವ್ಯಾಸನ /*ಶೋಭಿಸುವ ಮೂರ್ತಿಯನು ಮನದಿ ವಿಭಾಸಿಸೈ ಶಾಣಾಶ್ಮಬಿಂಬಿತೆ* ಅಂದರೆ ಶ್ರೀ ಹರಿಯ ವೃಕ್ಷಸ್ಥಳವಾಸಿಯಾದ ಲಕ್ಷ್ಮಿ ದೇವಿಯನ್ನು ಬೇಡುತ್ತಿದ್ದಾರೆ. ಈ ಸಂಸಾರದಲ್ಲಿ ಬಹಳ ನೊಂದಿರುವೆನು. ತಾಯಿ ತನ್ನ ಮಗುವನ...

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

Image
ಲೇಖನ :- ದುರ್ಗುಣಗಳು  ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ ನಮ್ಮ  ಭಾರತ ದೇಶ ಮಾದರಿಯ ದೇಶ. ಇಲ್ಲಿಯ ನೆಲ ಜಲ ಬಲ ಎಲ್ಲವೂ ಬಲಿಷ್ಠವಾಗಿದೆ.ಮತ್ತು ಹಿಂದು ಧರ್ಮದ ಸಾತ್ವಿಕ, ತಾತ್ವಿಕ ಮತ್ತು ನೈತಿಕತೆಯ ಬೀಡಾಗಿದೆ.  ಇಲ್ಲಿ ಆಚರಿಸುವ ಪ್ರತಿ ಹಬ್ಬಕ್ಕೂ ಶಾಸ್ತ್ರೀಯ ಪುರಾಣ ಗ್ರಂಥಗಳ ಆಧಾರವಾಗಿದೆ. ಮಾನವ ಕುಲಕೆ ಒಂದು ದಾರಿದಿಪವಾಗಿದೆ. ಆ ನಿಟ್ಟಿನಲ್ಲಿ ಇಂದಿನ ಪ್ರಸ್ತುತಿ ಅಕ್ಷಯ ತೃತೀಯ ಬಗ್ಗೆ ಹೇಳುತ್ತಿರುವೆ. ವೈಶಾಖ ಮಾಸದ ಮಹತ್ವ ವೆನೆಂದರೆ ವಿಶಾಖ ನಕ್ಷತ್ರದಲ್ಲಿ ಬರುವ ಈ ಮಾಸವನ್ನು ವೈಶಾಖ ಎಂದು ಕರೆಯಲಾಗುತ್ತದೆ. ವಿಶಾಖ ನಕ್ಷತ್ರವು ಬೃಹಸ್ಪತಿ ಮತ್ತು ಇಂದ್ರನ ಆಳ್ವಿಕೆಯಲ್ಲಿದೆ. ಈ ತಿಂಗಳು ಸ್ನಾನ, ಉಪವಾಸ ಮತ್ತು ಪೂಜಿಸುವುದು ಅತ್ಯಂತ ಪುಣ್ಯವನ್ನು ನೀಡುತ್ತದೆ. ಈ ಮಾಸದಲ್ಲಿ ಪರಶುರಾಮ ಜಯಂತಿ, ಅಕ್ಷಯ ತೃತೀಯ, ಮೋಹಿನಿ ಏಕಾದಶಿ ಮುಂತಾದ ಪ್ರಮುಖ ಹಬ್ಬಗಳಿವೆ. ಸ್ಕಂದ ಪುರಾಣದಲ್ಲಿ ಕೂಡಾ ವೈಶಾಖ ಮಾಸವನ್ನು ಉಲ್ಲೇಖಿಸಲಾಗಿದೆ. ದೇವರ ಆರಾಧನೆ, ಉಪಕಾರ ಮತ್ತು ಪುಣ್ಯಕ್ಕೆ ಇದು ಸೂಕ್ತ ತಿಂಗಳು. ಅದಕ್ಕಾಗಿಯೇ ಈ ಮಾಸದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಸ್ಥಾಪಿಸುವುದು, ಮರಗಳನ್ನು ರಕ್ಷಿಸುವುದು, ಬಡವರಿಗೆ. ಸಹಾಯ , ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಮಾಡಿದರೆ, ಸಂತೋಷ ಮತ್ತು ಸಂಪತ್ತು ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಸ್ಕಂದ ಪುರಾಣವು ವೈಶಾಖ ಮಾಸವನ್ನು, ವ...

ಹರಿದಾಸರು ವರ್ಣಿಸಿದ ಮಹಿಳಾ ದೇವತೆಗಳು

Image
*ಸಮಸ್ತ ಮಹಿಳಾ ಮಣಿಗಳಿಗೆ ಮಹಿಳಾ* *ದಿನಾಚರಣೆಯ*ಶುಭಾಶಯಗಳು*            🙏🙏 🎊🎊🎊🎊🎊🎊🎊🎊     * ಲೇಖನ :- ಹರಿದಾಸರು ವರ್ಣಿಸಿದ ದೇವತೆಗಳು ಲಕ್ಷ್ಮಿ,, ಸರಸ್ವತಿ, ಭಾರತಿ, ಪಾರ್ವತಿ* ಇಂದು ಮಾರ್ಚ ೮ ಮಹಿಳಾ ದಿನಾಚರಣೆ ಇರುವುದರಿಂದ ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,* *ಪಾರ್ವತಿ)* ಹಾಗೂ ಅವರ ಪಾತ್ರ ನಮ್ಮ ಜೀವನದಲ್ಲಿ ಎಷ್ಟು ಪ್ರಭಾವತೆಯಿಂದ ಕೂಡಿದೆ ಎಂಬುದರ ಬಗ್ಗೆ ಹರಿದಾಸರ ಕೃತಿಗಳಿಂದ ತಿಳಿದುಕೊಳ್ಳೋಣ     ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಸಾಮಾನ್ಯರ ಮನಸ್ಸು ಆಕರ್ಷಿಸಿದ ಹರಿದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು. ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿನ ನ್ಯೂನತೆ ಮತ್ತು ಅಂಧಕಾರವನ್ನು ಹೋಗಲಾಡಿಸಿ, ಭಕ್ತಿಯ ಬೀಜ ಬಿತ್ತಿದ್ದಾರೆ ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ’. *ಲಕ್ಷ್ಮಿ ಚಿಂತನೆ* ಲಕ್ಷ್ಮಿ  ದೇವಿ ವೇದಾಭಿಮಾನಿ ದೇವತೆ. ಸಿರಿ ಸಂಪತ್ತಿನ ಒಡತಿ, ಶ್ರೀನಿವಾಸನ ವೃಕ್ಷಸ್ಥಳವಾಸಿನಿ. ಅನಂತ ಗುಣಗಳಿಂದ ಶ್ರೇಷ್ಠಳು. *ಶ್ರೀ ವಾದಿರಾಜರು ರಚಿಸಿದ ಕೃತಿಯಲ್ಲಿ* *"ಕಾಯೇ ಶ್ರೀಕಾಮಲಾಲಾಯೆ /ಕಲ್ಲೂರನೀಲಯೇ /ಪ ನೊಂದಿರುವೆ ಸಂಸಾರದಿ ಸತಿಸುತರ ಸಂದಣಿ ಬೆಂದೆನೋ...